ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳ ವ್ಯವಹಾರ ಜ್ಞಾನ ವೃದ್ಧಿಗೆ ಕಾಂಗ್ರೆಸ್ ಸರ್ಕಾರ, ಹಣಕಾಸು ನಿರ್ವಹಣೆ ಶಿಕ್ಷಣ ನೀಡಲು ನಿರ್ಧರಿಸಿದೆ.
ಕೆಪಿಎಸ್ ಹಾಗೂ ಎಡಿಬಿ ಶಾಲೆಗಳು ಸೇರಿ ಒಟ್ಟು 956 ಶಾಲೆಗಳ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಪಾಠ ಸೌಲಭ್ಯ ಕಲ್ಪಿಸಲು ಮಹತ್ವದ ಆದೇಶ ಹೊರಡಿಸಿದೆ.
ಮೂಲಭೂತ ಬ್ಯಾಂಕಿಂಗ್, ಸುರಕ್ಷಿತ ಡಿಜಿಟಲ್ ವಹಿವಾಟು, ಹೂಡಿಕೆ ಸೇರಿದಂತೆ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಅಗತ್ಯ ಪಠ್ಯಕ್ರಮ ರಚಿಸಲು ಸೂಚಿಸಲಾಗಿದೆ.
ಕರ್ನಾಟಕದ ಕರಾವಳಿ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಈ ಭಾಗದ ಜಿಲ್ಲೆಗಳಲ್ಲಿ ಹೂಡಿಕೆ ಆಕರ್ಷಸಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ, ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಿದೆ.
ಆ ಮೂಲಕ ಈ ಭಾಗದ ಯುವಕರು ಉದ್ಯೋಗ ಹುಡುಕಿಕೊಂಡು ವಲಸೆ ಹೋಗುವುದನ್ನು ತಪ್ಪಿಸಲು ಈ ಮಹತ್ವದ ತೀರ್ಮಾನ ಮಾಡಲಾಗಿದೆ.
ಬಾಲಕರನ್ನು ಕಾರ್ಮಿಕರನ್ನಾಗಿಸುವ ವ್ಯವಸ್ಥೆಯ ವಿರುದ್ಧ ನಮ್ಮ ಸರ್ಕಾರದ ಕಾರ್ಯಾಚರಣೆ ನಿರಂತರ.
ಮುಖ್ಯಮಂತ್ರಿಗಳ ಆದೇಶದ ಮೇರೆ ಬೆಂಗಳೂರಿನ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ 19 ಬಾಲಕರನ್ನು ರಕ್ಷಿಸಿದ್ದ ಸರ್ಕಾರ, ಬಾಲ ಕಾರ್ಮಿಕ ಮುಕ್ತ ಕರ್ನಾಟಕದ ಸಾಕಾರಕ್ಕೆ ದಿಟ್ಟ ಹೆಜ್ಜೆ ಇರಿಸಿದೆ.
ಈಗಾಗಲೇ ರಾಜ್ಯದ 6076 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, 529 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಸಂಬಂಧ 105 ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಬಾಲಕರ ಬಾಲ್ಯ ಉಳಿಸಿ, ಅವರ ಭವಿಷ್ಯ ರೂಪಿಸುವುದು ನಮ್ಮ ಆದ್ಯತೆ
ಜಾಗತಿಕ ಸೆಮಿ ಕಂಡಕ್ಟರ್ ವಿನ್ಯಾಸದಲ್ಲಿ ಕರ್ನಾಟಕ ಕರ್ನಾಟಕ ನಂ.1 ಆಗಿ ಹೊರಹೊಮ್ಮಿದೆ. ಇದು ರಾಜ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಭಾರತದ ಚಿಪ್ ಡಿಸೈನ್ ಹಬ್ ಆಗಿ ಕರ್ನಾಟಕ ಹೊಸ ಮೈಲಿಗಲ್ಲು ಸಾಧಿಸಿದೆ.
ಚಿಪ್ ಉತ್ಪಾದನೆಗೆ ನೆರವು ನೀಡಲು ಕಾಂಗ್ರೆಸ್ ಸರ್ಕಾರ 81 ಸಂಸ್ಥೆಗಳಿಗೆ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲ ನೀಡಿದೆ. 73 ಚಿಪ್ ವಿನ್ಯಾಸ ಯಶಸ್ವಿಯಾಗಿದೆ.
ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸುವ ನಮ್ಮ ಸರ್ಕಾರದ ಪ್ರಯತ್ನಕ್ಕೆ ಇದು ಸಾಕ್ಷಿಯಾಗಿದೆ.
ಕರಾವಳಿ ಜನರ ದಶಕಗಳ ಸುದೀರ್ಘ ಕನಸನ್ನು ಕಾಂಗ್ರೆಸ್ ಸರ್ಕಾರ ಕೊನೆಗೂ ನನಸು ಮಾಡಿದೆ.
2 ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ರಾಜ್ಯದ 2ನೇ ಹೆಚ್ಚುವರಿ ಭಾಷೆಯಾಗಿ ರಾಜಮನ್ನಣೆ ನೀಡಿದೆ.
ಜತೆಗೆ ಭಾಷಾ ಬಳಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರತಿ ವರ್ಷ 82 ಲಕ್ಷ ರೂ.ಅನುದಾನವನ್ನೂ ಒದಗಿಸಲು ಸಚಿವ ಸಂಪುಟ ಅಸ್ತು ಎಂದಿದೆ.
ಕರಾವಳಿ ಜನರ ಭಾಷೆ, ಭಾವನೆಗಳಿಗೆ ಸ್ಪಂದಿಸಿದ ಹೆಮ್ಮೆ ನಮ್ಮ.
ತುಳು ಭಾಷೆಗೆ ರಾಜ್ಯದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನ ಸಿಗಬೇಕು ಎಂಬ ತುಳು ನಾಡಿಗರ ಬಹುದಿನಗಳ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ.
ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆಯನ್ನು ನೀಡುವ ಮೂಲಕ ಕನ್ನಡದೊಂದಿಗೆ ತುಳು ಭಾಷೆಯನ್ನು 2ನೇ ಹೆಚ್ಚುವರಿ ಅಧಿಕೃತ ಆಡಳಿತಾತ್ಮಕ ಭಾಷೆಯಾಗಿ ಘೋಷಿಸಿದೆ.
ಭಾಷಾ ಬಳಕೆ ಹಾಗೂ ಅಭಿವೃದ್ಧಿಗೆ ಸಂಬಂಧಿತ ಚಟುವಟಿಕೆಗಳಿಗಾಗಿ ಪ್ರತಿ ವರ್ಷ 82 ಲಕ್ಷ ರೂ. ಅನುದಾನವನ್ನೂ ಘೋಷಿಸಿದೆ.
ದಶಕಗಳ ಹೋರಾಟಕ್ಕೆ ಕೊನೆಗೂ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ.
#tulu2ndofficiallanguage
Lighting diyas is fine. But once the cameras are gone and the lamps burn out, who is looking at the ground reality?
What about the families struggling with rising prices, shrinking incomes and poverty? What about the helplessness people are actually living through?
A diya can light up a moment. But governance must light up people’s lives.
ಪ್ರಗತಿಯ ಪಥದತ್ತ ಕಲ್ಯಾಣ ಕರ್ನಾಟಕವನ್ನು ಕೊಂಡೊಯ್ಯುವುದು ಕಾಂಗ್ರೆಸ್ ಸರ್ಕಾರದ ದೃಢ ಸಂಕಲ್ಪ.
ಈ ಭಾಗದ ಅಭಿವೃದ್ಧಿಗೆ ಮೀಸಲಾಗಿರುವ ₹25 ಸಾವಿರ ಕೋಟಿ ಅನುದಾನದಲ್ಲಿ ಈಗಾಗಲೇ ₹14,000 ಕೋಟಿ ಖರ್ಚು ಮಾಡಲಾಗಿದೆ.
41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ.
ಕಲ್ಯಾಣಪಥ ಯೋಜನೆಯಡಿ 38 ವಿಧಾನಸಭಾ ಕ್ಷೇತ್ರಗಳಲ್ಲಿ 1,150 ಕಿ.ಮೀ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಲಾಗಿದೆ.
72 ಸಾವಿರ ಹುದ್ದೆಗಳ ಪೈಕಿ 32 ಸಾವಿರ ಉದ್ಯೋಗಗಳನ್ನು ಈ ಭಾಗದ ಯುವಕರಿಗಾಗಿ ಸರ್ಕಾರ ಮೀಸಲಿರಿಸಿದೆ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಗುರಿ
ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಅಳತೆಯಲ್ಲಿ ನಡೆಯುತ್ತಿದ್ದ ಮೋಸದ ತಡೆಗೆ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
ಇದುವರೆಗೆ 805 ಪೆಟ್ರೋಲ್ ಬಂಕ್ ಗಳ ಮೇಲೆ ದಾಳಿ ನಡೆಸಲಾಗಿದ್ದು, 768 ಬಂಕ್ ಗಳಲ್ಲಿ ಅಳತೆಯಲ್ಲಿ ಅಕ್ರಮ ಪತ್ತೆಯಾಗಿದೆ.
ಈ ಸಂಬಂಧ 101 ಬಂಕ್ ಗಳ ವಿರುದ್ಧ ಕೇಸು ದಾಖಲಿಸಿದ್ದು ದಂಡ ವಿಧಿಸಲಾಗಿದೆ.
ವಂಚನೆಗೆ ತಡೆ, ಪಾರದರ್ಶಕತೆಗೆ ನಮ್ಮ ಆದ್ಯತೆ
ಬಿಜೆಪಿ, ಪ್ರಧಾನಿ ಮೋದಿಯ 76ನೇ ಜನ್ಮದಿನದ ಸಂಭ್ರಮದಲ್ಲಿದೆ. ಆದರೆ ಯುವಕರ ಪಾಲಿಗೆ ಇದು ನಿರುದ್ಯೋಗ ದಿನ
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಪ್ರಧಾನಮಂತ್ರಿ, ದೇಶದ ಯುವಕರಿಗೆ ಕೊಟ್ಟಿದ್ದು ಮಾತ್ರ ಪಕೋಡ ಮಾರಿ ಎನ್ನುವ ಪುಕ್ಕಟೆ ಸಲಹೆ.
ಹೊಸ ಉದ್ಯೋಗ ಸೃಷ್ಟಿಸುವುದಿರಲಿ, ಇದ್ದ ಉದ್ಯೋಗಾವಕಾಶಗಳು ಇಲ್ಲವಾಗಿವೆ.
ದೇಶದ ಯುವಕರಿಗೆ ಇಂತಹ ಐತಿಹಾಸಿಕ ಉಡುಗೊರೆ ಕೊಟ್ಟಿರುವ ಸ್ವಯಂಘೋಷಿತ ವಿಶ್ವಗುರುವಿಗೆ ರಾಷ್ಟ್ರೀಯ ನಿರುದ್ಯೋಗ ದಿನದ ಶುಭಾಶಯಗಳು.
ರಾಜ್ಯದ ಅಬಕಾರಿ ಇಲಾಖೆ ಆಡಳಿತಕ್ಕೆ ಡಿಜಿಟಲ್ ರೂಪ ನೀಡಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ.
ಬಾಕಿ ಇರುವ 92 ಶಿಸ್ತು ಪ್ರಕರಣಗಳ ಶೀಘ್ರ ವಿಲೇವಾರಿ ಮತ್ತು ಅಕ್ರಮಗಳ ತಡೆಗೆ ಸ್ವತಂತ್ರ ಜಾಗೃತ ದಳ ಸ್ಥಾಪಿಸಿದೆ.
ಮದ್ಯದಂಗಡಿಗಳಲ್ಲಿ ಕಡ್ಡಾಯ ಡಿಜಿಟಲ್ ಪಾವತಿ, ಕಂಪ್ಯೂಟರೀಕೃತ ರಸೀದಿ ಮತ್ತು ಎಂಆರ್ಪಿ ಮೀರಿ ಹಣ ವಸೂಲಿಗೆ ಡಿಜಿಟಲ್ ದಂಡ ವ್ಯವಸ್ಥೆಯನ್ನೂ ಜಾರಿಗೊಳಿಸಿದೆ.
ಆದಾಯದ ಜತೆಗೆ ಗ್ರಾಹಕರ ಹಿತ ಕಾಯುವುದು ನಮ್ಮ ಬದ್ಧತೆ
ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್ ಗಳಿವೆ. ನಾವು 805 ಪೆಟ್ರೋಲ್ ಬಂಕ್ ಗಳ ಮೇಲೆ ದಾಳಿ ನಡೆಸಿದ್ದೇವೆ. ಈ ಪೈಕಿ 768 ಬಂಕ್ ಗಳಲ್ಲಿ ಅಕ್ರಮ ಪತ್ತೆಯಾಗಿದೆ. 101 ಬಂಕ್ ಗಳ ಮೇಲೆ ಕೇಸು ದಾಖಲಿಸಿ, ದಂಡವನ್ನೂ ವಿಧಿಸಿದ್ದೇವೆ.
2 ವರ್ಷಗಳಿಗೊಮ್ಮೆ ಬಂಕ್ ಗಳ ರಿಕ್ಯಾಲಿಬರೇಷನ್ ಮಾಡಬೇಕು ಎಂದು ಕೇಂದ್ರ ಸರ್ಕಾರದ ನಿಯಮ ಇದೆ. ಆದರೆ ರಿಕ್ಯಾಲಿಬರೇಷನ್ ಆಗಿ ಒಂದು ವರ್ಷವೂ ಆಗದ ಬಂಕ್ ಗಳಲ್ಲೇ ಅಳತೆಯಲ್ಲಿ ವ್ಯತ್ಯಾಸಗಳಿವೆ. ಅಕ್ರಮ ನಡೆಯುತ್ತಿದೆ. ಹೀಗಾಗಿ ಎರಡು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್ ಮಾಡಬೇಕೆಂಬ ಕೇಂದ್ರದ ನಿಯಮವನ್ನು ನಾವು ಒಪ್ಪುವುದಿಲ್ಲ.
@ArshadRizwan
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು
ಪ್ರಧಾನಿ ನರೇಂದ್ರ ಮೋದಿ ಈ ರಾಷ್ಟ್ರದ ಸುಳ್ಳಿನ ಸರದಾರ. ನಾವು ಅವರ ಜನ್ಮದಿನವನ್ನು ದೇಶದ ನಿರುದ್ಯೋಗ ದಿನ ಎಂದು ಆಚರಿಸುತ್ತಿದ್ದೇವೆ. ಮೋದಿ ದೇಶದ ನಿರುದ್ಯೋಗದ ಪಿತಾಮಹ. ದೇಶದಲ್ಲಿ ಶೇ.72 ರಷ್ಟು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಉದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಬದಲು ಅವರ ಜನ್ಮ ದಿನವನ್ನು ಬಿಜೆಪಿ ದೀಪ ಹಚ್ಚುವ ಮೂಲಕ ಆಚರಿಸುತ್ತಿದೆ. ಜನ್ಮದಿನ ಆಚರಿಸುವ ಮೊದಲು ಈ ನಕಲಿ ಹಿಂದುತ್ವವಾದಿಗಳು, ಯುವಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ.
@HariprasadBK2
ಕೆಪಿಸಿಸಿ ಅಧ್ಯಕ್ಷರು